ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ಐವರು ಸಾಧಕರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಸಂದಿದೆ. ದೇಶದಲ್ಲಿ ಒಟ್ಟು 128 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. 17 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗುತ್ತಿದೆ.
ಕವಿ ಸಿದ್ದಲಿಂಗಯ್ಯನವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಕೃಷಿ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಧಾರವಾಡದ ಅಣ್ಣಿಗೇರಿಯ ಅಬ್ಧುಲ್ ಖಾದರ್ ನಡಕಟ್ಟಿ, ಕೃಷಿ ತಂತ್ರಜ್ಞಾನ ಕ್ಷೇತ್ರದ ಸಾಧಕ ಎಸ್.ಅಯ್ಯಪ್ಪನ್, ಸುರಂಗ ಕೊರೆದು ತನ್ನ ಜಮೀನಿಗೆ ನೀರು ತಂದ ದಕ್ಷಿಣ ಕನ್ನಡ ಜಿಲ್ಲೆಯ ಅಮೈ ಮಹಾಲಿಂಗ ನಾಯ್ಕ, ಶಿವಮೊಗ್ಗದ ಗಮಕ ಗಂಧರ್ವ ಹೆಚ್.ಆರ್ ಕೇಶವಮೂರ್ತಿ ಪದ್ಮಶ್ರೀ ಒಲಿದಿದೆ.
ಇಂದು ಸಂಜೆ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.