ಕಾರಿಗೆ ಒರಗಿ ನಿಂತ ಬಾಲಕನಿಗೆ ಒದ್ದ ನೀಚ

204

ಪ್ರಜಾಸ್ತ್ರ ಸುದ್ದಿ

ಕೇರಳ: ದೇವರನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿಯೂ ಕ್ರೂರಿಗಳು ಇದ್ದಾರೆ ಅನ್ನೋದು ಇಂತಹ ವಿಡಿಯೋ ನೋಡಿದಾಗ ಅನಿಸುತ್ತೆ. ಏನು ಅರಿಯದ ಸುಮಾರು 6 ವರ್ಷದ ಬಾಲಕನೊಬ್ಬ ಕಾರಿಗೆ ಒರಗಿ ನಿಂತುಕೊಂಡಿದ್ದ ಅನ್ನೋ ಕಾರಣಕ್ಕೆ ಆತನಿಗೆ ಒದ್ದಿರುವ ಘಟನೆ ನಡೆದಿದೆ.

ಪೊನ್ನಿಯಂಪಾಲಂನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಬಾಲಕನಿಗೆ ಒದ್ದವನನ್ನು ಶಿಹಶಾದ್ ಎಂದು ಗುರುತಿಸಲಾಗಿದೆ. ವಕೀಲರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಠಾಣೆಗೆ ಕರೆಯಿಸಿ ವಾಪಸ್ ಕಳಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ಕಾರ್ಯಾಚರಣೆ ನಡೆಸಿ ಮತ್ತೆ ಆತನನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಬಾಲಕನಿಗೆ ಒದ್ದವನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಲಶ್ಶೇರಿ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಎ.ಎನ್ ಶಂಸೀರ್ ಹೇಳಿದ್ದಾರೆ. ಶಿಕ್ಷಣ ಸಚಿವ ಶಿವನ್ ಕುಟ್ಟಿ ಮಾನವೀಯತೆ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ ಎಂದು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!