ರಕ್ಷಣಾ ದೋಣಿ ಮುಳುಗಿ 9 ಸಾವು.. 16 ಜನ ನಾಪತ್ತೆ

362

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರಕ್ಷಣಾ ತಂಡದ ದೋಣಿ ಮುಳುಗಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಖಾಸಗಿ ರಕ್ಷಣಾ ತಂಡವೊಂದು ಸುಮಾರು 31 ಜನರನ್ನ ರಕ್ಷಿಸಿ ಕರೆದುಕೊಂಡು ಬರುತ್ತಿದ್ದಾಗ, ಪಾಲಸ್ ತೆಹಸಿಲ್ ನಲ್ಲಿರುವ ಬ್ರಹ್ಮಾನಲ್ ಗ್ರಾಮದ ಬಳಿ ಈ ಒಂದು ದುರಂತ ಸಂಭವಿಸಿದೆ ಎಂತಾ ಪುಣೆ ವಿಭಾಗೀಯ ಆಯುಕ್ತ ದೀಪಕ ಮೈಸೇಕರ್ ತಿಳಿಸಿದ್ದಾರೆ.

ಇಲ್ಲಿಯವರೆಗೂ 9 ಮೃತದೇಹಗಳನ್ನ ಹೊರ ತೆಗೆಯಲಾಗಿದೆ. ದೋಣಿ ಮುಗಿಚಿದ್ಮೇಲೆ 15 ಜನ ಈಜಿ ದಡ ಸೇರಿದ್ದಾರೆ. ಇನ್ನು ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಕಳೆದೊಂದು ವಾರದಲ್ಲಿ ಸುಮಾರು 16 ಜನ ಪ್ರಾಣ ಕಳೆದುಕೊಂಡಿದ್ದಾರೆ. 1.32 ಲಕ್ಷ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!