ಸಮುದ್ರದಲ್ಲಿ ಸಿಲುಕಿದ್ದ 9 ಕಾರ್ಮಿಕರ ರಕ್ಷಣೆ

193

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಸುರತ್ಕಲ್ ನಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಟಗ್ ಬೋಟ್ ನಲ್ಲಿ ಸಿಲುಕಿಕೊಂಡಿದ್ದ 9 ಜನ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಯ ಟೀಂ 9 ಜನರ ಪ್ರಾಣ ಉಳಿಸಿದೆ. ಈ ಬಗ್ಗೆ ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಲೆಗಳ ಹೊಡೆತಕ್ಕೆ ಎನ್ಎಂಪಿಟಿ ಬೋಟ್ ಮುಗುಚಿ ದುರಂತ ಸಂಭವಿಸಿತ್ತು. ಬೋಟ್ ನಲ್ಲಿದ್ದ 11 ಜನರಲ್ಲಿ ಇಬ್ಬರು ಈಜಿ ದಡ ಸೇರಿದ್ರು. ಓರ್ವ ಮೃತಪಟ್ಟಿದ್ದ. 9 ಜನರ ರಕ್ಷಣೆಗಾಗಿ ಭಾನುವಾರದಿಂದ ಅಂಗಲಾಚುತ್ತಿದ್ದರು. ಇದೀಗ ಅವರನ್ನ ರಕ್ಷಣೆ ಮಾಡಲಾಗಿದ್ದು, ಆರೋಗ್ಯ ತಪಾಸಣೆ ನಡೆಸಲಾಗ್ತಿದೆ.

ಮಂಗಳೂರಿನ ತೈಲ ಶುದ್ಧೀಕರಣ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಟಗ್ ಬೋಟ್ ಕೆಲಸ ಮಾಡ್ತಿತ್ತು. ಇದರಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು ತೌಕ್ತೆ ಚಂಡಮಾರುತದ ಪರಿಣಾಮ ಜೀವನ್ಮರಣದ ಹೋರಾಟ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!