ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪರಿಶಿಷ್ಟ ಪಂಗಡ ಪ್ರಮಾಣ ಪತ್ರಕ್ಕಾಗಿ ನಾಡಿನ ತುಂಬಾ ತಳವಾರ ಹಾಗೂ ಪರಿವಾರ ಸಮಾಜದವರು ಒಂದಲ್ಲ ಒಂದು ರೀತಿಯ ಹೋರಾಟ ನಡೆಸಿದ್ದಾರೆ. ಈ ಮೂಲಕ ತಮ್ಗೆ ಆಗ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಬಾರಿ ಎಸ್ಟಿ ಸರ್ಟಿಫಿಕೇಟ್ ನೀಡುವ ತನಕ ಹೋರಾಟದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ.
ರಕ್ತದಾನ ಚಳವಳಿ, ಜನಪ್ರತಿನಿಧಿಗಳ ಮನೆ ಚಲೋ, ಮನೆಗಳ ಮೇಲೆ ಕಪ್ಪು ಬಾವುಟ ಹಾರಾಟ ಸೇರಿದಂತೆ ನಿರಂತರವಾಗಿ ಒಂದು ರೀತಿಯ ಹೋರಾಟ ನಡೆಸ್ತಿದ್ದು, ಇದರ ಮುಂದುವರೆದ ಭಾಗವಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗ್ತಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗ್ತಿದೆ. ಈ ಧರಣಿ ಬುಧವಾರ 2ನೇ ದಿನ ಪೂರೈಸಿದೆ. ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವ ತನಕ ಧರಣಿ ನಡೆಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಈ ವೇಳೆ ತಳವಾರ, ಪರಿವಾರ ಸಮಾಜದ ಅಧ್ಯಕ್ಷ ಶ್ರೀಶೈಲ ಬುಯ್ಯಾರ, ಸಂತೋಷ ಹರನಾಳ, ಅನಿಲ ಕಡಕೊಳ, ಯಲ್ಲಾಲಿಂಗ ಬಳುಂಡಗಿ, ಈರಣ್ಣ ಕುರಿ, ದಾದಾ ಸಿಂದಗಿ, ಮಲ್ಲು ಹಿರೋಳ್ಳಿ, ಶಿವು ಕೊಟರಗಸ್ತಿ, ಮಾರುತಿಗೌಡ ಬಿರಾದಾರ, ಶಂಕರ ಕುರಿ, ಚಂದ್ರಕಾಂತ ಬೂದಿಹಾಳ, ಸಂತೋಷಕುಮಾರ ಪವಾರ, ಮಲಕಪ್ಪ ಜೇರಟಗಿ, ಶಂಕರ ಕಡಕೊಳ, ಪರಶುರಾಮ ಕೊಟರಗಸ್ತಿ, ಮಡಿವಾಳ ಕೊಟರಗಸ್ತಿ, ಮಡಿವಾಳ ನಾಯ್ಕೋಡಿ, ಗೊಲ್ಲಾಳಪ್ಪ ನಾಯ್ಕೋಡಿ, ಬಸವರಾಜ ತಳವಾರ ಸೇರಿ ಅನೇಕರು ಭಾಗವಹಿಸಿದ್ರು.