ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಇತರರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಧ್ಯ ಜಾಮೀನು ಮೇಲೆ ಹೊರಗೆ ಇರುವ ಡಿಕೆಗೆ ಮತ್ತೆ ಇಡಿ ಶಾಕ್ ನೀಡಿದೆ.
2019ರಲ್ಲಿ ಇಡಿ ಅಧಿಕಾರಿಗಳು ಡಿಕೆಶಿಯನ್ನು ಬಂಧಿಸಿದ್ದರು. 50 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಕಳೆದು ಬಂದರು. ಈಗ ಜಾರಿ ನಿರ್ದೇಶನಾಲಯದಿಂಂದ ಡಿ.ಕೆ ಶಿವಕುಮಾರ್ ಅವರಿಗೆ ಶಿಕ್ಷೆಯಾಗುತ್ತಾ? ಎಷ್ಟು ವರ್ಷ ಅನ್ನೋ ಕುತೂಹಲ ಮೂಡಿದೆ. ಇದು ಅವರ ರಾಜಕೀಯ ಜೀವನಕ್ಕೆ ಎಷ್ಟು ಕಂಟಕವಾಗುತ್ತೆ ಅನ್ನೋದು ಮುಖ್ಯವಾಗಿದೆ.
ಮುಖ್ಯಮಂತ್ರಿ ರೇಸಿನಲ್ಲಿರುವ ಡಿ.ಕೆ ಶಿವಕುಮಾರಗೆ ಈ ಪ್ರಕರಣ ದೊಡ್ಡ ಪೆಟ್ಟು ನೀಡುತ್ತಾ, ಇದರಿಂದ ಪಾರಾಗುತ್ತಾರಾ ಅನ್ನೋದು ಸೇರಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.