ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಹಿಂದೂ ಪದದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೀಡಿದ್ದ ಸವಾಲಿಗೆ ಪ್ರತಿಕ್ರಿಯೆ ನೀಡಿದ್ದಾರೆ. 10 ವರ್ಷದಲ್ಲಿ ಸೂಲಿಬೆಲೆ ಹೇಳಿದ್ದು ಆಗಿದೆಯಾ ಎಂದು ಹುಡುಕುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಚಿನ್ನದ ರಸ್ತೆ ಹುಡುಕುತ್ತಿದ್ದೇವೆ. ಮಂಗಳೂರಿಗೆ ಬೆಳಗ್ಗೆ ಹೋಗಿ ಸಂಜೆ ಬೆಂಗಳೂರಿಗೆ ಊಟಕ್ಕೆ ಬರುವ ಟ್ರೇನ್ ಹುಡುಕುತ್ತಿದ್ದೇವೆ. ಹೀಗಾಗಿ ಅವರು ಮಾತನಾಡಿದ್ದರಲ್ಲಿ ಒಂದಾದರೆ ಸತ್ಯವಾಗಿದ್ದರೆ ಚರ್ಚೆ ಮಾಡುತ್ತೇವೆ. ಇಂತಹ ವ್ಯಕ್ತಿಯ ಜೊತೆಗೆ ಚರ್ಚೆ ಮಾಡುವುದು ನನಗೆ ಹಾಗೂ ಕಾರ್ಯಕರ್ತರಿಗೆ ಅವಶ್ಯಕತೆ ಇಲ್ಲ ಎಂದು ಕುಟುಕಿದ್ದಾರೆ.