ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಈ ಬಾರಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಕಿತ್ತೂರು, ಸವದತ್ತಿ, ರಾಯಬಾಗದಲ್ಲಿ ಸಂಧಾನ ನಡೆಸುತ್ತಿದ್ದೇವೆ. ಅದಾಗದಿದ್ದರೆ ಬಿಟ್ಟು ಬಿಡುತ್ತೇವೆ. ಬಂಡಾಯ ಏಳುವುದು ಸಹಜ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇನ್ನು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುತ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲವೂ ಊಹಾಪೋಹ. ಸವದಿ ಅವರು ಎಲ್ಲಿಯೂ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಯಾರೂ ಕಾಂಗ್ರೆಸ್ ಗೆ ಬರುತ್ತಿಲ್ಲ. ಕೆಲವು ಕಡೆ ಬಂಡಾಯ ಎದು ಪಕ್ಷೇತರರಾಗಿ ನಿಲ್ಲುತ್ತಾರೆ ಏನು ಮಾಡಕ್ಕಾಗಲ್ಲ ಎಂದು ಹೇಳುವ ಮೂಲಕ ಟಿಕೆಟ್ ಫೈಟ್ ಜೋರಾಗಿದೆ ಅನ್ನೋದು ಪರೋಕ್ಷವಾಗಿ ಹೇಳಿದ್ದಾರೆ.