ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದಲ್ಲಿ ಶುಕ್ರವಾರ ಮುಕ್ತಾಯವಾಗಿದೆ. 14 ಕ್ಷೇತ್ರಗಳಿಗೆ ಮತದಾನ ನಡೆಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಕೆಲವು ಕಡೆ ಮತದಾನ ಬಹಿಷ್ಕಾರ, ಕಲ್ಲು ತೂರಾಟ ಬಿಟ್ಟರೆ ಬಹುತೇಕ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ. ಒಟ್ಟಾರೆಯಾಗಿ ಶೇ.63.90ರಷ್ಟು ಮತದಾನವಾಗಿದೆ.
ರಾಜಕೀಯ ಗಣ್ಯರು, ಸಿನಿಮಾ, ಕ್ರೀಡಾ ತಾರೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಕ್ಷೇತ್ರದ ಜನರು ಮತದಾನ ಮಾಡಲು ಆಸಕ್ತಿ ತೋರಿಸಿದ ಕಾರಣ ಶೇ.50ಕ್ಕಿಂತ ಕಡಿಮೆ ವೋಟಿಂಗ್ ಆಗಿದೆ. ಮಂಡ್ಯದಲ್ಲಿ ಶೇ.74.87ರಷ್ಟು ಮತದಾನ ಆಗುವ ಮೂಲಕ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಶೇ.72.13, ಹಾಸನ ಶೇ.72.13, ದಕ್ಷಿಣ ಕನ್ನಡ ಶೇ.71.83, ಚಿತ್ರದುರ್ಗ ಶೇ.67, ತುಮಕೂರು ಶೇ.72.10, ಮಂಡ್ಯ ಶೇ.74.87, ಮೈಸೂರು ಶೇ.65.65, ಚಾಮರಾಜನಗರ ಶೇ.69.60, ಬೆಂಗಳೂರು ಗ್ರಾಮಾಂತರ ಶೇ.61.78, ಬೆಂಗಳೂರು ಉತ್ತರ ಶೇ.50.04, ಬೆಂಗಳೂರು ಕೇಂದ್ರ ಶೇ.48.61, ಬೆಂಗಳೂರು ದಕ್ಷಿಣ ಶೇ.49.37, ಚಿಕ್ಕಬಳ್ಳಾಪುರ ಶೇ.70.97 ಹಾಗೂ ಕೋಲಾರದಲ್ಲಿ ಶೇ.71.26ರಷ್ಟು ಮತದಾನವಾಗಿದೆ.