ನೌಕರನಿಗೆ ಕಪಾಳಮೋಕ್ಷ ಮಾಡಿದ ಎಸಿ

197

ಪ್ರಜಾಸ್ತ್ರ ಸುದ್ದಿ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಹೀಗಾಗಿ ಭಾರೀ ಸರತಿ ಸಾಲು ಇದೆ. ಜೊತೆಗೆ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಗೇಟ್ ಮೂಲಕ ಬಂದ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಎಂಬುವರ ಮೇಲೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.

ಕುಟುಂಬ ಸಮೇತರಾಗಿ ಬಂದಿದ್ದ ಶಿವೇಗೌಡ, ಸರ್ಕಾರಿ ನೌಕರನ ಕಾರ್ಡ್ ತೋರಿಸಿ ವಿಐಪಿ ಗೇಟ್ ಮೂಲಕ ಓಡೋಡಿ ಬಂದಿದ್ದಾರೆ. ಈ ವೇಳೆ ಮುಖ್ಯದ್ವಾರದ ಬಳಿ ತಡೆದ ಎಸಿ, ಈ ಗೇಟ್ ನಲ್ಲಿ ಯಾಕೆ ಬರ್ತಿದಿಯಾ, ನಿನಗೆ ಯಾರು ಒಳಗೆ ಬಿಟ್ಟಿದ್ದು ಎಂದು ಕಪಾಳಿಗೆ ಹೊಡೆದಿದ್ದಾರೆ. ಸಾರ್ವಜನಿಕವಾಗಿ ಕುಟುಂಬಸ್ಥರ ಎದುರು ಎಸಿ ನಡೆದುಕೊಂಡ ರೀತಿಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ.


TAG


Leave a Reply

Your email address will not be published. Required fields are marked *

error: Content is protected !!