ಲಂಚ ಸ್ವೀಕರಿಸುವಾಗ ವಿಜಯಪುರದಲ್ಲಿ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ

638

ವಿಜಯಪುರ: ನಗರದ ನೀರು ಸರಬರಾಜು ಹಾಗೂ ಒಳಚರಂಡಿ ಕೇಚರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಲೆಕ್ಕ ಅಧೀಕ್ಷಕ ಎಂ.ಎಸ್.ಮದ್ದಾನಿಮಠ ಹಾಗೂ ಎಇಇ ಜೆ.ಎಸ್.ಸಾಲಿಮಠ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ಲಕ್ಷ್ಮಿ ಎಂಟರಪ್ರೈಸಸ್ ಗುತ್ತಿಗೆದಾರ ಅಶೋಕ ಪಾಟೀಲರಿಂದ ಲಂಚ ಸ್ವೀಕರಿಸುವಾಗ ಸಿಕ್ಕು ಬಿದ್ದಿದ್ದಾರೆ. ಲಂಚ ಪಡೆಯುವಾಗ 70 ಸಾವಿರ ಹಾಗೂ ಲೆಕ್ಕ ನೀಡಲಾರದ 1 ಲಕ್ಷ 43 ಸಾವಿರ ಜಪ್ತಿ ಮಾಡಲಾಗಿದೆ. ಮದ್ದಾನಿಮಠ 50 ಸಾವಿರ ಹಾಗೂ ಸಾಲಿಮಠ 20 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ಈ ಇಬ್ಬರು ಅಧಿಕಾರಿಗಳಿಂದ ಒಟ್ಟು 1 ಲಕ್ಷ 74 ಸಾವಿರದಾ 300 ರೂಪಾಯಿ ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!