ಬೆಂಗಳೂರು: ಐಪಿಎಸ್ ಅಧಿಕಾರಿ ಅಣ್ಣಮಲೈ ನೀಡಿದ್ದ ರಾಜೀನಾಮೆಯನ್ನ ಇಂದು ಅಂಗೀಕಾರ ಮಾಡಲಾಗಿದೆ. ಸುಮಾರು 5 ತಿಂಗಳ ಬಳಿಕ ರಾಜೀನಾಮೆಯನ್ನ ಅಂಗೀಕರಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಐಪಿಎಸ್ ಅಧಿಕಾರಿ ಮೇ 28ರಂದು ರಾಜೀನಾಮೆ ಸಲ್ಲಿಸಿದ್ರು. ಅದನ್ನ ಕೇಂದ್ರ ಗೃಹ ಇಲಾಖೆ ಇಂದು ಅಂಗೀಕರಿಸಿದೆ. ಹೀಗಾಗಿ ಇನ್ಮುಂದೆ ಅಣ್ಣಮಲೈ ಮಾಜಿ ಪೊಲೀಸ್ ಅಧಿಕಾರಿ ಆಗಲಿದ್ದಾರೆ.
ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಬರೆದ ಸುದೀರ್ಘ ಪತ್ರದಲ್ಲಿತ್ತು. ಬಳಿಕ ಅವರ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ ಸಹ ಹರಿದಾಡಿತು. ಅಲ್ದೇ ಕೆಲ ದಿನಗಳ ಹಿಂದೆ ಅವರು ನೀಡಿದ ಹೇಳಿಕೆ, ಭಾಗವಹಿಸಿದ ಕಾರ್ಯಕ್ರಮಗಳು ಅನುಮಾನ ಮೂಡಿಸಿದ್ವು. ಅದೇನೇ ಇರ್ಲಿ ಅವರು ಬಯಸಿದಂತೆ ರಾಜೀನಾಮೆ ಅಂಗೀಕಾರವಾಗಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದು ಹೆಸರು ಮಾಡಿದ್ರು. ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ರು. ಮುಂದಿನ ದಿನಗಳಲ್ಲಿ ಏನು ಬದಲಾವಣೆ ಆಗುತ್ತೆ ಕಾದು ನೋಡಬೇಕು.