6 ತಿಂಗಳಲ್ಲಿ ಮಾಧ್ಯಮಗಳ ನಿಯಂತ್ರಣ: ಅಣ್ಣಾಮಲೈ

269

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತಮಿಳುನಾಡಿನ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳನ್ನ ನಿಯಂತ್ರಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಸಾಕಷ್ಟು ವಿವಾದ ಸ್ವರೂಪ ಪಡೆದುಕೊಂಡು, ಆಕ್ರೋಶ ವ್ಯಕ್ತವಾಗ್ತಿದೆ.

ನಮ್ಮ ಕುರಿತು ಸುಳ್ಳು ಸುದ್ದಿಗಳನ್ನ ಹೇಳುತ್ತಿರುವವರನ್ನ ಮರೆತು ಬಿಡಿ. ಆದ್ರೆ, ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಮೂಲಕ ಬಹಿರಂಗವಾಗಿ ಬೆದರಿಕೆ ಹಾಕುವ ಕೆಲಸ ಮಾಡಲಾಗ್ತಿದೆ. ಇದಕ್ಕೂ ಮೊದ್ಲು ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಹೀಗಾಗಿಯೇ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದಾರೆ ಅನ್ನೋ ವಿರೋಧ ವ್ಯಕ್ತವಾಗಿದೆ.

ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಐಪಿಎಸ್ ಅಧಿಕಾರಿಯಾಗಿದ್ರು. ಬೆಂಗಳೂರು, ಚಿಕ್ಕಮಗಳೂರು, ತುಮಕೂರು ಸೇರಿ ಅನೇಕ ಕಡೆ ಕರ್ತವ್ಯ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನ ಕರ್ನಾಟಕದ ಸಿಂಗ್ ಎಂದು ಟೈಟಲ್ ಕೊಟ್ಟು ಪ್ರಚಾರ ಕೊಟ್ಟಿದ್ದೆ ಇದೆ ಮಾಧ್ಯಮಗಳು. ಹೀಗಾಗಿ ಅಣ್ಣಾಮಲೈ ಮಾಧ್ಯಮದ ಹೀರೋ ಹೊರ್ತು ಜನರ ಹೀರೋ ಅಲ್ಲವೆಂದು ಅನೇಕರು ಮೊದಲಿನಿಂದಲೂ ಹೇಳ್ತಿದ್ದಾರೆ. ಅದು ಈಗ ನಿಜವಾಗ್ತಿದೆ.




Leave a Reply

Your email address will not be published. Required fields are marked *

error: Content is protected !!