ಹೇಳಿಕೆ ತಿರುಚಿದ ಮಾಧ್ಯಮಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ: ಬಿ.ಕೆ ಹರಿಪ್ರಸಾದ್

85

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ನಿನ್ನೆ ನಾನು ಮಾತನಾಡಿರುವುದನ್ನು ಕೆಲ ಮಾಧ್ಯಮಗಳು ತಿರುಚಿವೆ. ಇದರ ವಿರುದ್ಧ ಇಂದು ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ತಿರುಚಿದ ಸುದ್ದಿಯನ್ನು ಬಿಜೆಪಿಯವರು ತಮ್ಮ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಪಾಕಿಸ್ತಾನ್ ಬಿಜೆಪಿಯವರಿಗೆ ಶತ್ರು ರಾಷ್ಟ್ರ. ನಮಗೆ ನೆರೆಯ ರಾಷ್ಟ್ರ ಎಂದು ಹೇಳಿದ್ದನ್ನು ಕೆಲ ಮಾಧ್ಯಮಗಳಲ್ಲಿ ಬೇರೆ ರೀತಿ ತೋರಿಸಲಾಗುತ್ತಿದೆ. ಇದು ಪರಿಷತ್ ಹಕ್ಕುಚ್ಯುತಿಯಾಗಲಿದೆ. ಆದ್ದರಿಂದ ನಾನು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದು, ಕೆಲ ಮಾಧ್ಯಮಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!