ಬೆಂಗಳೂರು: ಅಕ್ಟೋಬರ್ 12 ರಂದು ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಪಿಎ ರಮೇಶ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಜ್ಞಾನಭಾರತಿ ಠಾಣೆ ಪೊಲೀಸ್ರು ಪರಮೇಶ್ವರ ಅವರನ್ನ ಇಂದು ವಿಚಾರಣೆ ನಡೆಸಬಹುದು ಅನ್ನೋದು ಉನ್ನತ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ. ರಮೇಶ ಕುಟುಂಬಸ್ಥರು ಇದೊಂದು ಅಸಹಜ ಸಾವು ಎಂದು ದೂರು ನೀಡಿದ ಕಾರಣ, ಜ್ಞಾನಭಾರತಿ ಠಾಣೆ ಪೊಲೀಸ್ರು ವಿಚಾರಣೆಯನ್ನ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಪರಮೇಶ್ವರ ಕಾರು ಚಾಲಕ ಸೇರಿದಂತೆ ಅನೇಕರ ವಿಚಾರಣೆ ನಡೆಸಿದ್ದಾರೆ.
ರಮೇಶ ಸಾವಿನ ಕುರಿತು ಯಾವುದಾದ್ರೂ ತನಿಖಾ ಸಂಸ್ಥೆಯಿಂದ ಕಂಪ್ಲೀಟ್ ತನಿಖೆ ನಡೆಯಬೇಕೆಂದು ಡಾ.ಜಿ ಪರಮೇಶ್ವರ ಹೇಳಿದ್ರು. ಈ ಬಗ್ಗೆ ಹಲವು ಗೊಂದಲಗಳು ಮೂಡಿವೆ. ಕೆಲವು ನಾಯಕರು ನಾನೇ ಕೊಲ್ಲಿಸಿದ್ದೇನೆ ಅನ್ನೋ ರೀತಿಯಲ್ಲಿ ಮಾತ್ನಾಡ್ತಿದ್ದಾರೆ. ಹೀಗಾಗಿ ಇದರ ಸಮಗ್ರ ತನಿಖೆಯಾಗ್ಲಿ ಅಂತಾ ಪರಂ ಹೇಳಿದ್ರು. ಈ ಹಿನ್ನೆಲೆಯಲ್ಲಿ ಡಾ.ಜಿ ಪರಮೇಶ್ವರ ವಿಚಾರಣೆ ಇಂದು ನಡೆಯಬಹುದು ಅಂತಾ ಹೇಳಲಾಗ್ತಿದೆ.