ಬ್ರೇಕಿಂಗ್ ನ್ಯೂಸ್
Search

ನಾಳೆ ಜೆಡಿಎಸ್ ಮಹತ್ವದ ಸಭೆ

330

ಬೆಂಗಳೂರು: ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರ ನಡುವಿನ ಅಸಮಾಧಾನವನ್ನ ಹೋಗಲಾಡಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ನಾಳೆ ಸಭೆ ನಡೆಸಲಿದ್ದಾರೆ.

ದೋಸ್ತಿ ಸರ್ಕಾರದ ಟೈಂನಲ್ಲಿ ಸೂಕ್ತ ಸ್ಥಾನಮಾನ ನೀಡಲ್ಲ ಅನ್ನೋದು ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದನ್ನ ಬಗೆಹರಿಸುವುದು ಹಾಗೂ ಮುಂಬರ್ತಿರುವ ನಾಲ್ಕು ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲು ಶುಕ್ರವಾರ ಸಭೆ ಕರೆಯಲಾಗಿದೆ.

ಪಶ್ಚಿಮ, ಆಗ್ನೇಯ ಪದವಿಧರ ಹಾಗೂ ಈಶಾನ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಕರೆಯಲಾಗಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ, ಎಲ್ಲರ ಒಮ್ಮತದ ಅಭಿಪ್ರಾಯದ ಸಲುವಾಗಿ ಶುಕ್ರವಾರ ಸಭೆ ಕರೆಯಲಾಗಿದೆ ಅಂತಾ ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!