ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಒಂದು ಪಕ್ಷ ತಾನು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಗೊತ್ತಿರುವ ಪಕ್ಷ ಈ ರೀತಿಯ ಪ್ರಣಾಳಿಕೆ ಮಾಡಲು ಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಕಾಂಗ್ರೆಸ್ ತಲೆಕೆಳಗೆ ಮಾಡಲು ನೋಡುತ್ತಿದೆ. ವರ್ಷಕ್ಕೆ 30 ಲಕ್ಷ ಉದ್ಯೋಗದ ಭರವಸೆ ನೀಡಿದ್ದಾರೆ. ಆದರೆ, ಕೇವಲ 40 ಲಕ್ಷ ಉದ್ಯೋಗಗಳು ಮಂಜೂರಗಿವೆ. ರಾತ್ರೋರಾತ್ರಿ 30 ಲಕ್ಷ ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಕನಸು ಕಾಣುತ್ತಿದ್ದಾರೆ. ತಮ್ಮನ್ನು ತಾವು ಮಾಸ್ ಲೀಡರ್ ಎಂದುಕೊಂಡಿದ್ದಾರೆಯೇ? ರಾಹುಲ್ ಗಾಂಧಿಯ ಅಪಕ್ಷ ಆರ್ಥಿಕ ವಿಷಯಗಳನ್ನು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಒಪ್ಪುತ್ತಾರೆಯೇ ಅಂತಾ ಕೇಳಿದರು.