ನಾಯಕರಿಬ್ಬರ ಆಣೆ ಪ್ರಮಾಣ ಹೈಡ್ರಾಮಾ

344

ಮೈಸೂರು: ಮಾಜಿ ಸಚಿವ ಸಾ.ರಾ ಮಹೇಶ ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ ನಡುವಿನ ಮಾತಿನ ಸಮರ, ಚಾಮುಂಡೇಶ್ವರಿ ಬೆಟ್ಟದ ತನಕ ಹೋಗಿದೆ. ಆದ್ರೆ, ದೇಗುಲದಲ್ಲಿ ಯಾವುದೇ ಆಣೆ ಪ್ರಮಾಣ ನಡೆಯದೆ, ಇಬ್ಬರು ನಾಯಕರು ನಡೆಸಿದ ಹೈಡ್ರಾಮಾ ನಾಡಿನ ಜನತೆಗೆ ಬೇಸರ ತರಿಸಿದೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ, ಹೆಚ್. ವಿಶ್ವನಾಥ ವಿರದ್ಧ ವಾಗ್ದಾಳಿ ನಡೆಸಿದ್ದಾರೆ. ನೀವೆಷ್ಟು ಪ್ರಮಾಣಿಕರು ಅನ್ನೋದು ರಾಜ್ಯದ ಜನತೆಗೆ ಗೊತ್ತಿದೆ. ಚಾಮುಂಡಿ ಪುಣ್ಯಕ್ಷೇತ್ರವನ್ನ ಅಪವಿತ್ರ ಗೊಳಿಸಬೇಡಿ. ಚುನಾವಣೆ ಬರ್ತಿದೆ. ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ತೋರಿಸಿ ಅಂತಾ ಕಿಡಿ ಕಾರಿದ್ದಾರೆ.

ಇನ್ನು ಈ ಇಬ್ಬರ ನಾಯಕರ ಆಣೆ ಪ್ರಮಾಣಕ್ಕೆ ಭಕ್ತರನ್ನ ಬಾಗಿಲು ಬಳಿ ತಡೆದು ನಿಲ್ಲಿಸಿದ್ದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ. ಇಷ್ಟೆಲ್ಲ ಮಾಡಿದ ನಾಯಕರು ಬೆಟ್ಟದಲ್ಲಿದ್ರೂ ಮುಖಾಮುಖಿಯಾಗದೆ ಹೊರಟು ಹೋದ್ರು.




Leave a Reply

Your email address will not be published. Required fields are marked *

error: Content is protected !!