ಮೈಸೂರು ವಿಭಜನೆಗೆ ಪರ-ವಿರೋಧ

368

ಮೈಸೂರು: ಜಿಲ್ಲೆಯನ್ನ ವಿಭಜನೆ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ ಹೇಳಿದ್ದಾರೆ. ವಿಭಜನೆ ಬಗ್ಗೆ ಇಂದು ಮಾತ್ನಾಡಿದ ಅವರು, ಮೈಸೂರಿನಿಂದ ಹುಣಸೂರು ಪ್ರತ್ಯೇಕ ಮಾಡುವುದಕ್ಕೆ ನಮ್ಮ ವಿರೋಧವಿದೆ ಅಂತಾ ಹೇಳಿದ್ರು.

ಮೈಸೂರು ಸಾಂಸ್ಕೃತಿಕ ನಗರಿ. ಎಲ್ಲ ತಾಲೂಕುಗಳು ಒಟ್ಟಾಗಿ ಇರಬೇಕು. ಹೆಚ್.ವಿಶ್ವನಾಥ ಶಾಸಕರಾಗಿದ್ದ ಟೈಂನಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದೀಗ ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ ಅಂತಾ ಕಿಡಿ ಕಾರಿದ್ರು. ಹುಣಸೂರು ಪ್ರತ್ಯೇಕ ಜಿಲ್ಲೆಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ ಆಗ್ರಹಿಸಿದ್ದು, ಇದಕ್ಕಾಗಿ ಪ್ರತ್ಯೇಕ ಹೋರಾಟ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!