ಪ್ರಜಾಸ್ತ್ರ ಅಪರಾಧ ಸುದ್ದಿ
ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಬುಧವಾರ ತಡರಾತ್ರಿ ಡಬಲ್ ಮರ್ಡರ್ ನಡೆದಿದೆ. ಪರಸಯ್ಯನ ಛತ್ರದ ಹತ್ತಿರ ಇರುವ ಎಸ್.ಎನ್ ಶಾಮಿಲ್ ನಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಶಾಮಿಲ್ ವ್ಯಾಚ್ ಮನ್ ವೆಂಕಟೇಶ್(75) ಹಾಗೂ ಇಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ಷಣ್ಮುಖ(65) ಕೊಲೆಯಾದ ದುರ್ದೈವಿಗಳು.
ಶಾಮಿಲ್ ನಲ್ಲಿ ಮಲಗುತ್ತಿದ್ದ ಇವರು ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಎದ್ದು ಹೊರ ಬರುತ್ತಿದ್ದರು. ಆದರೆ, ಇಂದು ಮುಂಜಾನೆ 7ಗಂಟೆಯಾದರೂ ಹೊರ ಬಂದಿಲ್ಲ. ಹೀಗಾಗಿ ನೆರೆ ಹೊರೆಯವರು ಶಾಮಿಲ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ನೋಡಿದಾಗ ಕೊಲೆಯಾಗಿರುವುದು ತಿಳಿದು ಬಂದಿದೆ.
ದುಷ್ಕರ್ಮಿಗಳು ಯಾವ ಕಾರಣಕ್ಕೆ ಅಮಾಯಕರ ಜೀವ ಬಲಿ ಪಡೆದಿದ್ದಾರೆ ಅನ್ನೋದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಡಿಷನಲ್ ಎಸ್ಪಿ ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.