ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಖತರ್ನಾಕ್ ಕಳ್ಳರು ಎಟಿಎಂನಲ್ಲಿಯೇ ಹಣ ಕದ್ದಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ನಗರದ ಬಸವೇಶ್ವರ ಸರ್ಕಲ್ ಹತ್ತಿರದಲ್ಲಿನ ಭಾರತೀಯ ಅಂಚೆ ಕಚೇರಿಯಲ್ಲಿರುವ ಎಟಿಎಂನಲ್ಲಿ ಕಳ್ಳತನ ಮಾಡಲಾಗಿದೆ.
ಬುಧವಾರ ತಡರಾತ್ರಿ ಭಾರತೀಯ ಅಂಚೆಯ ಎಟಿಎಂ ಒಡೆದು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಎಷ್ಟು ಹಣ ಕಳ್ಳತನವಾಗಿದೆ ಅನ್ನೋ ಮಾಹಿತಿ ತಿಳಿದು ಬರಬೇಕಿದೆ. ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.