ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾಂಕ್ರೆಟ್ ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದ ಪರಿಣಾಮ ತಾಯಿ, ಮಗು ಇಬ್ಬರು ಮೃತಪಟ್ಟಿದ್ದಾರೆ. ಆನೇಕಲ್ ತಾಲೂಕಿನ ಬನ್ನೇರಘಟ್ಟ ಹತ್ತಿರ ನಡೆದಿದೆ.
ಶೇರ್ ವುಡ್ ಹೈ ಶಾಲೆಗೆ ಮಗುವನ್ನು ಬಿಡಲು ಕಾರಿನಲ್ಲಿ ಬರುತ್ತಿದ್ದರು. ಕನಕಪುರ ಮಾರ್ಗವಾಗಿ ಬನ್ನೇರುಘಟ್ಟದ ಕಡೆ ಬರುತ್ತಿದ್ದ ಕಾಂಕ್ರೆಟ್ ಮಿಕ್ಸರ್ ಲಾರಿ, ಸ್ವಿಫ್ಟ್ ಕಾರಿನ ಮೇಲೆ ಬಿದ್ದು ಇಂತಹ ಅನಾಹುತ ಸಂಭವಿಸಿದೆ.