ಬೆಂಗಳೂರು: ನಗರದ ಇನ್ ಫ್ಯಾಂಟ್ರಿ ರೋಡ್ ನಲ್ಲಿರುವ ಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿದೆ. ಇದ್ರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಹಲವಾರು ಅಂಗಡಿಗಳು ಸೇರಿದಂತೆ ಬೈಕ್ ಶೋರೂಮ್ ಗೆ ತಲುಪಿ ಶೋರೂಮ್ ಹೊತ್ತಿ ಉರಿದಿದೆ. ಘಟನೆಯಿಂದ ಹೊಸ ಬೈಕ್ ಗಳು ಸುಟ್ಟು ಕರಕಲಾಗಿವೆ.
ಈ ಕಾಂಪ್ಲೆಕ್ಸ್ ನಲ್ಲಿದ್ದ ಅನೇಕ ಅಂಗಡಿಗಳಿಗೂ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಎರಡು ಅಗ್ನಿಶಾಮಕ ದಳದ ವಾಹನಗಳು ಬಂದಿದ್ದು ಬೆಂಕಿ ನಂದಿಸುವ ಕೆಲಸ ಮಾಡ್ತಿವೆ. ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಒಂದಲ್ಲ ಒಂದು ಬೆಂಕಿ ಅನಾಹುತ ಸಂಭವಿಸ್ತಿವೆ. ಬೆಂಗಳೂರು ಜನರಿಗೆ ಇನ್ನು ಏನ್ ಗಂಡಾಂತರ ಕಾಯ್ದಿದೆ ಗೊತ್ತಾಗ್ತಿಲ್ಲ.