ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಮುಂಬೈನ ಸಿವಿಲ್ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದೆ. ಆಲಿಯಾ ನಟನೆಯ ಗಂಗೂಬಾಯಿ ಕಾತೇವಾಡಿ ಸಿನಿಮಾ ಸಂಬಂಧ ಈ ದೂರು ದಾಖಲಾಗಿದೆ. ಅಲ್ದೇ, ಈ ಚಿತ್ರದ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ವಿರುದ್ಧ ಸಹ ಕೇಸ್ ಆಗಿದೆ.
ಗಂಗೂಬಾಯಿ ಕಾತೇವಾಡಿ ಕುರಿತು ದಿ ಮಾಫಿಯಾ ಕ್ವೀನ್ ಆಫ್ ಮುಂಬೈ ಅನ್ನೋ ಪುಸ್ತಕವನ್ನ ಜೈದಿ ಎಂಬುವರು ಬರೆದಿದ್ದಾರೆ. ಇದು ಇದೀಗ ಸಿನಿಮಾ ಆಗ್ತಿದೆ. ಇದರ ವಿರುದ್ಧ ಗಂಗೂಬಾಯಿ ಕಾತೇವಾಡಿ ಕುಟುಂಬಸ್ಥರು ತಿರುಗಿ ಬಿದ್ದಿದ್ದಾರೆ. ಚಿತ್ರದಲ್ಲಿ ಗಂಗೂಬಾಯಿಯನ್ನ ಅಸಭ್ಯವಾಗಿ ತೋರಿಸಲಾಗಿದೆ. ಕೂಡಲೇ ಶೂಟಿಂಗ್ ನಿಲ್ಲಿಸಬೇಕು ಎಂದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಸಂಜಯ ಲೀಲಾ ಬನ್ಸಾಲಿ ಒಂದು ರೀತಿಯ ಸೌಥ್ ದುನಿಯಾ ನಿರ್ದೇಶಕ ರಾಮ್ ಗೋಪಾಲ ವರ್ಮಾ ರೀತಿ ವಿವಾದ ಮಾಡಿಕೊಳ್ತಾರೆ. ನಿರ್ದೇಶಕ ವರ್ಮಾ ವಿವಾದಾತ್ಮಕ ವ್ಯಕ್ತಿಗಳ, ಘಟನೆಗಳ ಕಥೆಯನ್ನ ತೆರೆಯ ಮೇಲೆ ತರ್ತಾರೆ. ಅಲ್ದೇ, ಹಸಿಬಿಸಿ ದೃಶ್ಯಗಳ ಮೂಲಕ ವಿವಾದ ಮಾಡಿಕೊಳ್ತಾರೆ. ಸಂಜಯ ಲೀಲಾ ಬನ್ಸಾಲಿ, ಬೇರೆಯವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡ್ತಾರೆ. ಅದು ವಿವಾದವೇ ಆಗಿರುತ್ತೆ. ಹೀಗಾಗಿ ಗಂಗೂಬಾಯಿ ಕಾತೇವಾಡಿ ಕಥೆ ಏನಾಗುತ್ತೆ ಕಾದು ನೋಡಬೇಕು.