ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಇದೀಗ ರಾಯಭಾರಿಯಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ನಟ ಶ್ರೀಮುರುಳಿ ಆಯ್ಕೆಯಾಗಿದ್ದಾರೆ. ಹೀಗಾಗಿ ನಟನಿಗೆ ಸಿಎಂ ಬಿ.ಎಸ್ ಯಡಿಯೂರಪ್ಪನವರು ಅಭಿನಂದನೆ ಸಲ್ಲಿಸಿದ್ರು.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಸದ್ಯ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕಾರ್ಯನಿವರ್ಹಿಸ್ತಿದ್ದಾರೆ. ಇದೀಗ ನಟ ಶ್ರೀಮುರುಳಿ ನಟ ದರ್ಶನಗೆ ಜೊತೆಯಾಗಿದ್ದಾರೆ. ರಾಯಭಾರಿ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಸೇರಿದಂತೆ ಕೆಲ ಗಣ್ಯರು ಭಾಗವಹಿಸಿದ್ರು.