ಭರಾಟೆ ಹಾಡಿನಿಂದ ಬರುವ ದುಡ್ಡು ಉ.ಕ ಪರಿಹಾರ ನಿಧಿಗೆ

369

ನಟ ಶ್ರೀಮುರಳಿ ನಟನೆಯ ಭರಾಟೆ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆದಿದೆ. ಎರಡು ಹಾಡುಗಳ ಶೂಟಿಂಗ್ ಗಾಗಿ ಚಿತ್ರತಂಡ ವಿದೇಶಕ್ಕೆ ಹೋಗಿದೆ. ಹೀಗಾಗಿ ಅಲ್ಲಿಂದಲೇ ಉತ್ತರ ಕರ್ನಾಟಕದ ನೆರವಿಗೆ ಚಿತ್ರತಂಡ ಬಂದಿದೆ. ಈ ಬಗ್ಗೆ ಮಾತ್ನಾಡಿರುವ ರೋರಿಂಗ್ ಸ್ಟಾರ್ ನಟ ಶ್ರೀಮುರಳಿ, ಉತ್ತರ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ತುಂಬಾ ನೋವಾಗಿದೆ. ಈ ಟೈಂನಲ್ಲಿ ನಾವು ಅವರ ಜೊತೆ ಇರಬೇಕಿತ್ತು. ವಿದೇಶದಲ್ಲಿ ಇರೋದ್ರಿಂದ ಆಗ್ತಿಲ್ಲ. ಹೀಗಾಗಿ ನಮ್ಮ ಕೈಲಾಯದ ಸಹಾಯ ಮಾಡಿ ಅಂತಾ ಅಭಿಮಾನಿಗಳಿಗೆ ಹೇಳಿದ್ದಾರೆ.

ಇನ್ನು ವರಮಹಾಲಕ್ಷ್ಮಿ ಹಬ್ಬವಾದ ಇಂದು ವಿದೇಶದಲ್ಲಿಯೇ ಒಂದು ಸಾಂಗ್ ರಿಲೀಸ್ ಆಗ್ತಿದೆ. ಆ ಸಾಂಗ್ ನಿಂದ ಬರುವ ಹಣವನ್ನ ಉತ್ತರ ಕರ್ನಾಟಕ ಪರಿಹಾರ ನಿಧಿಗೆ ನೀಡುವುದಾಗಿ ಚಿತ್ರತಂಡ ಹೇಳಿದೆ. ಈ ಮೂಲಕ ಚಿತ್ರತಂಡ ನಿಮ್ಮ ಜೊತೆ ಇರುತ್ತೆ ಅನ್ನೋ ಮಾತನ್ನ ಶ್ರೀಮುರಳಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!