ಕುರುಕ್ಷೇತ್ರ ನೋಡಿದ ದರ್ಶನ ಮದರ್ ಇಂಡಿಯಾ ಹೇಳಿದ್ದೇನು?

397

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ, ರೆಬಲ್ ಸ್ಟಾರ್ ಅಂಬರೀಶ, ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಬಹುದೊಡ್ಡ ತಾರಾಗಣ ಇರುವ ಕುರುಕ್ಷೇತ್ರ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಮೂಲಕ ಇಷ್ಟು ದಿನಗಳ ಕಾಲ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳು ಫುಲ್ ಜೋಶನಲ್ಲಿದ್ದಾರೆ.

ಇನ್ನು ಈ ಬಗ್ಗೆ ದರ್ಶನ ಮದರ್ ಇಂಡಿಯಾ ಸಂತಸವನ್ನ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಪ್ರಿಮಿಯರ್ ಶೋ ನೋಡಿದ ಹಿರಿಯ ನಟಿ ಸಂಸದೆ ಸುಮಲತಾ ಅಂಬರೀಶ್ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂಗೊಳ್ಳಿ ರಾಯಣ್ಣ ಸಿನ್ಮಾದ ಬಳಿಕ ಇದೊಂದು ಲ್ಯಾಂಡ್ ಮಾರ್ಕ್ ಆಗುತ್ತೆ ಅಂದಿದ್ದಾರೆ.

ದುರ್ಯೋಧನ ಅಂದ್ರೆ ದರ್ಶನ ಅನ್ನೋ ರೀತಿ ನಟಿಸಿದ್ದಾರೆ. ಇನ್ಮುಂದೆ ಅವರು ಡಿ ಬಾಸ್ ಅಲ್ಲ ದುರ್ಯೋಧನ ಬಾಸ್ ಅಂತಾ ಹೊಸ ಬಿರುದು ಕೊಟ್ಟಿದ್ದಾರೆ. ಇನ್ನು ಈ ಸಿನಿಮಾ ನನ್ಗೆ ತುಂಬಾ ಭಾವನಾತ್ಮಕವಾಗಿದೆ. ಅಂಬರೀಶ ಅವರು ನಟಿಸಲ್ಲ ಅಂದ್ರೂ ಮುನಿರತ್ನ ಅವರ ಕೋರಿಕೆ ಮೇಲೆ ಆ್ಯಕ್ಟ್ ಮಾಡಿದ್ದಾರೆ. ಹೀಗಾಗಿ ಸ್ಕ್ರೀನ್ ಮೇಲೆ ಅವರನ್ನ ಮತ್ತೆ ನೋಡುವ ಅವಕಾಶ ಸಿಕ್ಕಿದೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!