ನಟ ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಗೀತಾ ಸಿನಿಮಾ ಸೆಪ್ಟೆಂಬರ್ 27ರಂದು ರಿಲೀಸ್ ಆಗ್ತಿದೆ. ಆದ್ರೆ, ಕನ್ನಡದ ಸ್ಟಾರ್ ನಟರ ಚಿತ್ರಗಳಿಗೂ ಪೈರಸಿ ಭೂತ ಕಾಡ್ತಿದೆ. ಪೈಲ್ವಾನ್ ಸಿನಿಮಾ ಎದುರಿಸಿದ ಪರಿಸ್ಥಿತಿಯನ್ನ ತಪ್ಪಿಸಿಕೊಳ್ಳಲು ಗೀತಾ ಸಿನ್ಮಾ ಟೀಂ ಪ್ಲಾನ್ ಮಾಡಿದೆ.
ಆಂಟಿ ಪೈರಸಿ ಸಂಸ್ಥೆಯೊಂದಿಗೆ ಗೀತಾ ಟೀಂ ಟೈಯಪ್ ಮಾಡಿಕೊಂಡಿದೆ. ಚಿತ್ರ ಬಿಡುಗಡೆಯಾದ್ಮೇಲೆ ಸಿನ್ಮಾ ಸೋರಿಕೆಯಾದ್ರೆ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಂ ಡಿಸಿಪಿ ರವಿಕುಮಾರ ಅವರಿಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ಚಿತ್ರ ತಂಡ ತಮ್ಮದೆ ಹೊಸ ತಂಡ ರೆಡಿ ಮಾಡಿದ್ದು, ಥಿಯೇಟರ್ ಗಳಲ್ಲಿ ಚೆಕ್ಕಿಂಗ್ ಮಾಡಲಿದೆಯಂತೆ.