ಸಿದ್ದರಾಮಯ್ಯನವರಿಂದ ನಾನು ಸಿಎಂ ಆಗಿಲ್ಲ

375

ಚನ್ನಪಟ್ಟಣ: ನಾನು ಸಿದ್ದರಾಮಯ್ಯನವರು ಸಾಕಿದ ಗಿಣಿ ಅಲ್ಲ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ನಾನು ಅವರಿಂದ ಸಿಎಂ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿಂದ ಸಿಎಂ ಆಗಿದ್ದೇನೆ ಅಂತಾ ರಾಮನಗರದ ಚನ್ನಪಟ್ಟಣದಲ್ಲಿ ಹೇಳಿದ್ದಾರೆ.

ನಾನು ಸಿಎಂ ಆಗಿರುವುದನ್ನ ಸಿದ್ದರಾಮಯ್ಯನವರು ಎಷ್ಟು ಸಹಿಸಿಕೊಂಡಿದ್ದಾರೆ ಅನ್ನೋದು ಗೊತ್ತು. ರಾಮನಗರದ ಜನತೆ ನನ್ನನ್ನು ಬೆಳೆಸಿದವರು. ಸಿದ್ದರಾಮಯ್ಯನವರು ಸೇರಿದಂತೆ ಯಾರೆಲ್ಲ ದೇವೇಗೌಡರನ್ನ ಹದ್ದಾಗಿ ಕುಕ್ಕಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಇತಿಹಾಸ ಬರೆಯುವವರು ಅದನ್ನ ಬರೆಯುತ್ತಾರೆ ಅಂತಾ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!