ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: 2023ರ ಚುನಾವಣೆಯ ನಂತರ ಸಿಎಂ ಯಾರಾಗ್ತಾರೆ ಅನ್ನೋದಕ್ಕೆ ಕುರಿತಂತೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾರನ್ನು ಬೇಕಾದರೂ ಸಿಎಂ ಮಾಡಲಿ. ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯವೆಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರನ್ನಾದರೂ ಸಿಎಂ ಮಾಡಲಿ, ಅಲ್ಪಸಂಖ್ಯಾರನ್ನಾದರೂ ಸಿಎಂ ಮಾಡಲಿ. ನನಗೆ ಯಾವುದೇ ಬೇಜಾರಿಲ್ಲ. ಯಾರನ್ನು ಸಿಎಂ ಮಾಡಬೇಕು ಅನ್ನೋದು ಶಾಸಕರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರವೆಂದು ಹೇಳಿದರು.
ಇನ್ನು ಕುಮಾರಸ್ವಾಮಿ ಹೇಳಿರೋದು ಸುಳ್ಳು. ಯಡಿಯೂರಪ್ಪ ಆರ್ ಎಸ್ಎಸ್. ನಮಗೂ ಅವರಿಗೂ ತದ್ವಿರುದ್ಧ. ಅಧಿಕಾರದಲ್ಲಿರುವವರ ಮನೆ ಬಾಗಿಲಿಗೆ ನಾನೆಂದೂ ಹೋಗಲ್ಲ. ಅದು ನನ್ನ ಪ್ರಿನ್ಸಿಪಲ್ ಎನ್ನುವ ಮೂಲಕ, ಹೆಚ್ಡಿಕೆ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ.