ಕ್ಷೇತ್ರದ ಜನತೆಗಾಗಿ 3 ಆಂಬುಲೆನ್ಸ್ ಕಳುಹಿಸಿದ ಸಿದ್ದರಾಮಯ್ಯ

217

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ವಿಪಕ್ಷ ನಾಯಕ, ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದರಾಮಯ್ಯ, ಕರೋನಾ ರೋಗಿಗಳ ಸೇವೆಗಾಗಿ 3 ಆಂಬುಲೆನ್ಸ್ ಗಳನ್ನ ಭಾನುವಾರ ಕಳುಹಿಸಿಕೊಟ್ಟಿದ್ದಾರೆ. ಇನ್ನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸ್ತಿರುವ ವೈದ್ಯರಿಗೆ ಎನ್ 95 ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನ ವಿತರಿಸಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ಸಹಾಯವಾಣಿ ಹಾಗೂ ಲಸಿಕೆ ಪಡೆಯುವವರು ನೋಂದಾಯಿಸಿಕೊಳ್ಳಲು ಹೆಲ್ಫ್ ಡೆಸ್ಕ್ ಪ್ರಾರಂಭಿಸಲು ಸೂಚಿಸಿರುವುದಾಗಿ ಟ್ವೀಟರ್ ಮೂಲಕ ತಿಳಿಸಿದ್ದಾರೆ.

ಈ ‌ವೇಳೆ ತಹಶೀಲ್ದಾರ್ ಸುಹಾಸ ಇಂಗಳೆ, ಟಿಎಚ್ಓ ಡಾ.ಮಲ್ಲನಗೌಡ ಪಾಟೀಲ, ಸಿಪಿಐ ರಮೇಶ ಹಾನಾಪುರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಪಿಎಸ್ಐ ನೇತ್ರಾವತಿ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!