ಕನ್ನಡದ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ, ಅವಕಾಶಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗು, ತಮಿಳು ಸಿನಿ ದುನಿಯಾದಲ್ಲಿ ನಟನಿಗೆ ಸಾಯುವ ತನಕ ಅವಕಾಶ ಕೊಡ್ತಾರೆ. ಆದ್ರೆ, ನಮ್ಮಲ್ಲಿ ಅದು ಆಗ್ತಿಲ್ಲವೆಂದು ಬೇಸರ ಹೊರ ಹಾಕಿದ್ದಾರೆ.
ರಾಜಲಕ್ಷ್ಮಿ ಅನ್ನೋ ಸಿನ್ಮಾದಲ್ಲಿ ನಟ ಟೆನ್ನಿಸ್ ಕೃಷ್ಣ ನಟಿಸಿದ್ದು, ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತ್ನಾಡಿದ ಅವರು, ಹೊನವಳ್ಳಿ ಕೃಷ್ಣ ಸೇರಿದಂತೆ ಹಿರಿಯ ಕಲಾವಿದರಿಗೆ ಅವಕಾಶ ಕೊಡಲಾಗಿದೆ. ಬಹುದಿನಗಳಿಂದ ತೆರೆಯಿಂದ ದೂರ ಉಳಿದಿದ್ದ ಕಲಾವಿದರು ಮತ್ತೆ ತೆರೆಗೆ ಬರ್ತಿದ್ದಾರೆ ಅಂತಾ ಹೇಳಿದ್ದಾರೆ.
ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಕೇಳ್ತಾರೆ. ಯಾಕೆ ಯಾವುದೂ ಸಿನ್ಮಾದಲ್ಲಿ ನಟಿಸ್ತಿಲ್ಲ. ನೀವು ಇನ್ನು ಸಿನ್ಮಾಗಳಲ್ಲಿ ನಟಿಸಬೇಕು ಅಂತಾ ಹೇಳ್ತಾರೆ. ಹೀಗೆ ಅಂದಾಗ ನಾವು ಏನೆಂದು ಪ್ರತಿಕ್ರಿಯೆ ನೀಡಬೇಕು ಎಂದು ಅಸಹಾಯಕತೆ ತೋಡಿಕೊಂಡ್ರು.