ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿನ ಶೋ ಮುಗಿಸಿಕೊಂಡು ಬರುವಾಗ ಲಾರಿ ಅಪಘಾತದಿಂದ 6 ವರ್ಷದ ಪುಟ್ಟ ಕಂದನನ್ನು ಕಳೆದುಕೊಂಡಿರುವ ನಟಿ, ನಿರೂಪಕಿ ಅಮೃತಾ ನಾಯ್ಡು ಅವರು ಜನರ ಬಳಿ ಮನವಿಯೊಂದು ಮಾಡಿಕೊಂಡಿದ್ದಾರೆ.
ನಾನೀಗ ನಾಲ್ಕು ತಿಂಗಳು ಗರ್ಭಿಣಿ. ನನ್ನ ಮಗಳು ಸಮನ್ವಿ ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ. ಅದಕ್ಕಾಗಿ ನೀವು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿಮ್ಮ ಪ್ರಾರ್ಥನೆಯಿಂದ ಭಗವಂತ ನನ್ನ ಮುದ್ದು ಕಂದನನ್ನು ವಾಪಸ್ ಕಳುಹಿಸಿಕೊಡಲಿ. ಆಗಷ್ಟೇ ನಾನು ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದು, ವೈರಲ್ ಆಗಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಡೆದ ಈ ದುರಂತದಿಂದ ಕರುನಾಡಿನ ಜನತೆ ಕಣ್ಣೀರು ಹಾಕಿದರು. ನನ್ನಮ್ಮ ಸೂಪರ್ ಸ್ಟಾರ್ ಶೋ ಶೂಟಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿಯಿಂದಾಗಿ ಈ ದುರಂತ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೃತಾ ನಾಯ್ಡು ಮನವಿ ಮಾಡಿಕೊಂಡಿದ್ದಾರೆ.