ಕನ್ನಡದಲ್ಲಿ ಬಂದ ಕಿರಿಕ್ ಪಾರ್ಟಿ ಸಿನ್ಮಾದಿಂದ ರಾತ್ರೋರಾತ್ರಿ ಸ್ಟಾರ್ ನಟಿಯಾದವಳು ರಶ್ಮಿಕಾ ಮಂದಣ್ಣ. ಕನ್ನಡದ ಜೊತೆ ತೆಲುಗು, ತಮಿಳು ಚಿತ್ರದಲ್ಲಿಯೂ ಕಾಣಿಸಿಕೊಂಡು ಬಹುಭಾಷೆ ನಟಿಯಾದ್ಳು. ಇದರ ಜೊತೆಗೆ ಸದಾ ವಿವಾದಗಳನ್ನ ಮಾಡಿಕೊಂಡು ಬರ್ತಿರುವ ನಟಿಯರಲ್ಲಿ ರಶ್ಮಿಕಾ ಸಹ ಒಬ್ಳು.
ಇದೀಗ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿಯಾಗಿದೆ. ಯೂಟ್ಯೂಬ್ ಚಾನಲ್ ವೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ನನ್ನ ಅಕೌಂಟ್ ನಲ್ಲಿ ದುಡ್ಡೆ ಇಲ್ಲ. ನನ್ನ ಅಕೌಂಟ್ ಖಾಲಿಯಿದೆ ಎಂದು ಹೇಳಿದ್ಳು. ಹೀಗೆ ಹೇಳಿ ವಾರ ಕಳೆದಿಲ್ಲ ಐಟಿ ದಾಳಿಯಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆಯಿಂದ 5 ಕಿಲೋ ಮೀಟರ್ ದೂರದಲ್ಲಿರುವ ಮೈತಾಡಿ ಎಂಬಾಲ್ಲಿ 25 ಎಕರೆ ಕಾಫಿ ತೋಟವನ್ನ ನಟಿ ಕುಟುಂಬ ಖರೀದಿಸಿದಂತೆ. ಇನ್ನು ಗೋಣಿಕೊಪ್ಪ ಮುಖ್ಯರಸ್ತೆಯ ಬಿಟ್ಟಂಗಾಲ ಅನ್ನೋ ಗ್ರಾಮದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಸಿಯಲ್ ಸ್ಕೂಲ್ ಶುರು ಮಾಡುವುದು, ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿತೋಟ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಂಭಾವನೆ ಹಣದಿಂದ ಒಂದಿಷ್ಟು ವ್ಯವಹಾರದಲ್ಲಿ ತೊಡಗಿದ್ದು, ಈ ವೇಳೆ ತೆರಿಗೆ ವಂಚನೆಯ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಾರ್ ಖರೀದಿ ಮಾಡಿರುವುದು ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಕಿರಿಕ್ ನಟಿ ಮನೆ ಮೇಲೆ ಐಟಿ ದಾಳಿ ನಡೆದಿದ್ದು ಪರಿಶೀಲನೆ ನಡೆಸಲಾಗ್ತಿದೆ.