ಭಾಷೆ ವಿಚಾರಕ್ಕೆ ಕನ್ನಡ ನಟಿಗೆ ಕಿರುಕುಳವೇ? ಟ್ರೆಂಡ್ ಆಯ್ತು #Vijayalakshmi

340

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ವಿಜಯಲಕ್ಷ್ಮಿ ಅವರ ವಿಡಿಯೋವೊಂದು ಭಾನುವಾರದಿಂದ ಎಲ್ಲೆಡೆ ಚರ್ಚೆಯಾಗ್ತಿದೆ. ಕಾರಣ, ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವುದು. ಕನ್ನಡ ಮೂಲದ ನಟಿಗೆ ತಮಿಳುನಾಡಿನಲ್ಲಿ ಭಾಷೆಯ ಕಾರಣಕ್ಕೆ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಧ್ಯ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ, ನಾಮ್ ತಮಿಳರ್ ಕಚ್ಚಿ ಪಕ್ಷದ ಸೀಮಾನ್, ಪವನ್ ಕಟ್ಟು ಪಾಡೈ ಕಚ್ಚಿ ಪಕ್ಷದ ಹರಿ ನಾಡರ್ ಕಿರುಕುಳ ನೀಡಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನಟಿ ವಿಜಯಲಕ್ಷ್ಮಿ ಪರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಕೆಲವರು ರಾಜಕೀಯ ಗುದ್ದಾಟಕ್ಕೆ ನಟಿ ಬಲಿಯಾಗ್ತಿದ್ದಾರೆ ಎಂದಿದ್ದಾರೆ.

ಭಾಷೆಯ ಕಾರಣಕ್ಕೆ ನಟಿಗೆ ಕಿರುಕುಳ ಕೊಟ್ಟವರಿಗೆ ಶಿಕ್ಷೆಯಾಗಬೇಕು. ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ಎಷ್ಟು ಸರಿ. ಕಲಾವಿದರ ಸಂಘ ಏನು ಮಾಡ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕನ್ನಡ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿಯೂ ಹಲವು ಚಿತ್ರಗಳಲ್ಲಿ ನಟಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!