ಪ್ರಜಾಸ್ತ್ರ ಸುದ್ದಿ
ಭದ್ರಾವತಿ: ತಾಲೂಕಿನ ದಾಸರಹಳ್ಳಿಯಲ್ಲಿ ರಾತ್ರೋರಾತ್ರಿ ಅಣ್ಣಪ್ಪ ಎಂಬುವವರ ತೋಟದಲ್ಲಿ 39 ಅಡಿಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಇಂದು ಮುಂಜಾನೆ ವಿಷಯ ತಿಳಿದು ಕುಟುಂಬಸ್ಥರು ಹೋಗಿ ನೋಡಿದಾಗ ಯಾರೋ ದುಷ್ಕರ್ಮಿಗಳು ಗಿಡಗಳನ್ನು ಕಡಿದಿದ್ದಾರೆ.
ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶನಿವಾರ ಸಂಜೆ ಅಣ್ಣಪ್ಪ ತೋಟದಲ್ಲಿ ದನಗಳನ್ನು ಮೇಯಿಸಿಕೊಂಡು ಬಂದಿದ್ದಾನೆ. ಬೆಳಗಾಗುವುದರೊಳಗೆ ಈ ಘಟನೆ ನಡೆದಿದೆ.