ರಾತ್ರೋರಾತ್ರಿ ಅಡಕೆ ಗಿಡಗಳಿಗೆ ಕೊಡಲಿಯೇಟು!

211

ಪ್ರಜಾಸ್ತ್ರ ಸುದ್ದಿ

ಭದ್ರಾವತಿ: ತಾಲೂಕಿನ ದಾಸರಹಳ್ಳಿಯಲ್ಲಿ ರಾತ್ರೋರಾತ್ರಿ ಅಣ್ಣಪ್ಪ ಎಂಬುವವರ ತೋಟದಲ್ಲಿ 39 ಅಡಿಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಇಂದು ಮುಂಜಾನೆ ವಿಷಯ ತಿಳಿದು ಕುಟುಂಬಸ್ಥರು ಹೋಗಿ ನೋಡಿದಾಗ ಯಾರೋ ದುಷ್ಕರ್ಮಿಗಳು ಗಿಡಗಳನ್ನು ಕಡಿದಿದ್ದಾರೆ.

ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶನಿವಾರ ಸಂಜೆ ಅಣ್ಣಪ್ಪ ತೋಟದಲ್ಲಿ ದನಗಳನ್ನು ಮೇಯಿಸಿಕೊಂಡು ಬಂದಿದ್ದಾನೆ. ಬೆಳಗಾಗುವುದರೊಳಗೆ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!