ಜೂ.24ಕ್ಕೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ

201

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶ್ಯಾದ್ಯಂತ ಅಗ್ನಿಪಥ್ ಯೋಜನೆ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇದರ ನಡುವೆಯೂ ಜೂನ್ 24ರಂದು ಮೊದಲ ಬ್ಯಾಚಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು, ಏರ್ ಮಾರ್ಷಲ್ ಎಸ್.ಕೆ ಜಾ ಹೇಳಿದ್ದಾರೆ.

ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಗ್ನಿವೀರರ ಮೊದಲ ಬ್ಯಾಚ್ ನ ನೇಮಕಾತಿ ಜೂನ್ 24 ಹಾಗೂ ಜಲೈ 24ರಂದು ಆನ್ಲೈನ್ ಪರೀಕ್ಷೆ ನಡೆಯಲಿವೆ. ಡಿಸೆಂಬರ್ ವೊಳಗೆ ಮೊದಲ ಬ್ಯಾಚ್ ನೋಂದಣಿಯಾಗಲಿದೆ. ಡಿಸೆಂಬರ್ 30ರೊಳಗೆ ತರಬೇತಿ ನಡೆಯಲಿದೆ ಎಂದಿದ್ದಾರೆ.

ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಮಾತನಾಡಿ, ಅಗ್ನಿ ವೀರರಿಗೆ 1 ಕೋಟಿ ಜೀವ ವಿಮೆ ನೀಡಲಾಗುತ್ತೆ. ಭತ್ಯೆಯಲ್ಲಿ ಯಾವುದೇ ತಾರತಮ್ಯವಿಲ್ಲ. ಶೇಕಡ 70ರಷ್ಟು ಗ್ರಾಮೀಣ ಭಾಗದ ಯುವಕರಿಗೆ ಮೀಸಲಾತಿ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!