ಎಐಎಡಿಎಂಕೆಯಿಂದ ಮಾಜಿ ಸಿಎಂ ಸೆಲ್ವಂ ಸೇರಿ ಮೂವರ ವಜಾ

173

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎಐಎಡಿಎಂಕೆ ಪಕ್ಷದಿಂದ ಮಾಜಿ ಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ ಮೂವರನ್ನು ವಜಾಗೊಳಿಸಲಾಗಿದೆ. ಪ್ರಾಥಮಿಕ ಸದಸ್ಯ ಸ್ಥಾನದಿಂದ ಜನರಲ್ ಕೌನ್ಸಿಲ್ ಇಂದು ವಜಾಗೊಳಿಸಿದೆ.

ಮಾಜಿ ಸಿಎಂ ಸೆಲ್ವಂ, ಮಾಜಿ ಸಚಿವ ಆರ್.ವೈತಿಲಿಂಗಂ, ಮಾಜಿ ಶಾಸಕ ಜೆಸಿಡಿ ಪ್ರಭಾಕರನ್ ಹಾಗೂ ಮನೋಜ್ ಪಾಂಡಿಯನ್ ಅವರನ್ನು ವಜಾಗೊಳಿಸಲಾಗಿದೆ. ಪಕ್ಷಕ್ಕೆ ಕಳಂಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದು ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಪಕ್ಷದ ಹುದ್ದೆಯಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಇ.ಪಳನಿಸ್ವಾಮಿ ಆಯ್ಕೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!