ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಆಲಮಟ್ಟಿ ಡ್ಯಾಮ್ ನಿಂದ ಹೊರ ಹರಿವು ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ್ನಾಡಿದ ಅವರು, ಈಗಾಗಲೇ ಸಿಎಂ ಜೊತೆಗೆ ನಡೆಸಿದ ವರ್ಚುಲ್ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲದೇ, ಶುಕ್ರವಾರ ಆಲಮಟ್ಟಿ ಡ್ಯಾಮ್ ಗೆ ಮಹಾರಾಷ್ಟ್ರದಿಂದ 1.5 ಲಕ್ಷ ಕ್ಯೂಸೆಕ್ ನೀರು ಬಂದಿದೆ. ಆದ್ರೆ, ಡ್ಯಾಮ್ ನಿಂದ ಹೊರ ಹರಿವು ಮಾತ್ರ ಮಾಡಿಲ್ಲ.
ಒಳ ಹರಿವಿನ ಪ್ರಮಾಣ ನೋಡಿಕೊಂಡು ಆಲಮಟ್ಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೊರ ಹರಿವು ಬಿಡುವ ಆದೇಶ ತೆಗದುಕೊಳ್ಳುತ್ತಾರೆ ಅಂತಾ ಜಿಲ್ಲಾಧಿಕಾರಿ ತಿಳಿಸಿದ್ರು.