ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳಲ್ಲಿ ಒಂದಾಗಿರುವ ಅನ್ನ ಭಾಗ್ಯ ಯೋಜನೆ ನಾಳೆಯಿಂದ ಜಾರಿಗೆ ಬರಲಿದೆ. ಆದರೆ, 10 ಕೆಜಿ ಅಕ್ಕಿಯ ಬದಲು 5 ಕೆಜಿ ಹಾಗೂ ಹಣ ನೀಡಲು ಸರ್ಕಾರ ಸಜ್ಜಾಗಿದೆ.
ಈ ಕುರಿತು ಮಾತನಾಡಿರುವ ಆಹಾರ ಖಾತೆ ಸಚಿವ ಕೆ.ಹೆಚ್ ಮುನಿಯಪ್ಪ, 5 ಕೆಜಿ ಹಾಗೂ 5 ಕೆಜಿ ಅಕ್ಕಿಯ ಹಣ ನೀಡುತ್ತೇವೆ. ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿ ನೀಡಲಾಗುತ್ತೆ ಅಕ್ಕಿ ಸಿಗುವ ತನಕ ಹಣ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಅಂತಾ ಹೇಳಿದರು.
ಚುನಾವಣೆ ಪೂರ್ವದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಕೈ ನಾಯಕರು ಹೇಳಿದ್ದರು. ಅದರಂತೆ ಅಕ್ಕಿ ಕೊಡಬೇಕು ಅಂದರೆ ಕೇಂದ್ರ ಸರ್ಕಾರ ಹೆಚ್ಚುವರಿಯ 5 ಕೆಜಿ ಅಕ್ಕಿ ನೀಡಬೇಕಿದೆ. ಆದರೆ, ಕೇಂದ್ರ ಸರ್ಕಾರ ಅಕ್ಕಿ ಇಲ್ಲ ಅಂತಾ ಹೇಳಿದ್ದು, ರಾಜಕೀಯ ಮೇಲಾಟ ನಡೆದು ಈಗ ಹಣ ನೀಡುವ ತೀರ್ಮಾನ ಮಾಡಿದೆ. ಇದಕ್ಕೂ ವಿರೋಧ ವ್ಯಕ್ತವಾಗುತ್ತಿದೆ.
ರಾಜ್ಯ ಸಚಿವರು ಮೂರು ತಿಂಗಳ ತನಕ 5 ಕೆಜಿ ಅಕ್ಕಿ ಹಾಗೂ ಹಣ ನೀಡುತ್ತೇವೆ. ಅಷ್ಟರೊಳಗೆ ಅಕ್ಕಿ ಹೊಂದಿಸಿಕೊಂಡು 10 ಕೆಜಿ ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತೆ ಕಾದು ನೋಡಬೇಕು.