ಪ್ರಜಾಸ್ತ್ರ ಸುದ್ದಿ
ಉಡುಪಿ: ಕಳೆದೊಂದು ವಾರದ ಹಿಂದೆ ಬೈಂದೂರಿನ ಕೊಲ್ಲೂರು ಹತ್ತಿರದ ಅರಿಶಿನಗುಂಡಿ ಫಾಲ್ಸ್ ನಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ಭದ್ರಾವತಿ ಮೂಲದ ಶರತ್ ಕುಮಾರ್(23) ಮೃತ ದುರ್ದೈವಿ.
ಫಾಲ್ಸ್ ನೋಡಲು ಬಂದ ಸಂದರ್ಭದಲ್ಲಿ ಅಪಾಯದ ಸ್ಥಳದಲ್ಲಿ ಹೋಗಿ ಕಾಲು ಜಾರಿ ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಶರತ್ ಮೃತದೇಹ 200 ಮೀಟರ್ ಆಳದಲ್ಲಿ ಕಲ್ಲಿನ ಬಂಡೆ ಕಳೆಗೆ ಸಿಲುಕಿತ್ತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆಯಾಗಿದೆ.