ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ: ತಾಲೂಕಿನ ಕಡ್ಲೇವಾಡ ಚಟ್ಟರಿಕಿ ರಸ್ತೆ ಮಾರ್ಗದ ಮಧ್ಯೆ ಇರುವ ನಿಂಬೆ ತೋಟದಲ್ಲಿ ಯುವಕನ ಶವ ಪತ್ತೆಯಾಗಿದೆ. ಕಾಶೀನಾಥ ಪುಂಡಲೀಕ ನಾಯ್ಕೋಡಿ(30) ಮೃತ ಯುವಕ ಎಂದು ತಿಳಿದು ಬಂದಿದೆ.
ಹಡಗಿನಾಳ ಗ್ರಾಮದ ಕಾಶೀನಾಥ, ಪತ್ನಿ ಊರಾದ ಕಡ್ಲೇವಾಡ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ವಾಸವಾಗಿದ್ದ ಎಂದು ಹೇಳಲಾಗುತ್ತಿದೆ. ಇದೀಗ ನೋಡಿದರೆ ಆತನ ಶವ ನಿಂಬೆ ತೋಟವೊಂದರಲ್ಲಿ ಪತ್ತೆಯಾಗಿದೆ. ಈ ಕುರಿತು ಸಾಕಷ್ಟು ಅನುಮಾನಗಳು ಮೂಡಿವೆ. ಪಿಎಸ್ಐ ಆರ್.ವೈ ಬೀಳಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.