ಪ್ರಜಾಸ್ತ್ರ ಸುದ್ದಿ
ಸಿಂದಗಿ: 2023-24ನೇ ಸಾಲಿನ ಕ್ರೀಡಾ ಕೂಟದಲ್ಲಿ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಹರೀಶ ಕುಂಬಾರ (ಕರಾಟೆ ಪ್ರಥಮ), ಶ್ರೇಷ್ಠಿ ಕುಂಬಾರ (ಜೂಡೊ ಪ್ರಥಮ) ಹಾಗೂ ವಿದ್ಯಾ ಹಿರೇಮಠ (ಜೂಡೊ ಪ್ರಥಮ) ಇವರು ಜಿಲ್ಲಾ ಕ್ರೀಡಾಕೂಟದಲ್ಲಿ ವಿಜೇಯತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಲೀಕ್ ಗರಡಿಮನಿ (ಹಡಲ್ಸ್ ಪ್ರಥಮ), ಮಾಳಪ್ಪ ನಾಟೀಕಾರ (ಎತ್ತರ ಜಿಗಿತ ಪ್ರಥಮ), ಅಭಿಷೇಕ ಹಿಕ್ಕನಗುತ್ತಿ (5 ಕೀಲೋ ಮೀಟರ್ ನಡಿಗೆ ಪ್ರಥಮ), ಪ್ರಶಾಂತ ಬಿರಾದಾರ (3 ಸಾವಿರ ಮೀಟರ್ ಓಟ ದ್ವೀತಿಯ), ಶರದಿ ಹಿರೇಮಠ (ಎತ್ತರ ಜಿಗಿತ ದ್ವಿತೀಯ) ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಎಸ್.ಕೆ ಬಿರಾದಾರ, ದೈಹಿಕ ಶಿಕ್ಷಣ ಶಿಕ್ಷಕರಾದ ಮಲ್ಲಮ್ಮ ಪ್ರಭುಗೌಡ ಬಿರಾದಾರ, ಸಿ. ಎಂ ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶುಭ ಕೋರಿದ್ದಾರೆ.