ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಶ್ರಮಿಕ ವರ್ಗದವರು ಜೀವನ ಕಷ್ಟಕ್ಕೆ ಸಿಲುಕಿದೆ. ಹೀಗಾಗಿ ರಾಜ್ಯ ಸರ್ಕಾರ ಕೆಲ ವಲಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂಪಾಯಿ ನೀಡ್ತಿದೆ. ಹೀಗಾಗಿ ಇದನ್ನ ಪಡೆಯಲು ಆರ್ ಟಿಓ ಮಾರ್ಗಸೂಚಿ ಹೊರಡಿಸಿದೆ.
ಸರ್ಕಾರದ ಪರಿಹಾರ ಧನ ಪಡೆಯಲು, ಚಾಲನೆ ಮಾಡಲು ಪಡೆದಿರುವ ಪರವಾನಿಗೆ ಪತ್ರ ಹಾಗೂ ಬ್ಯಾಡ್ಜ್ ಇದ್ದವರು ಅರ್ಜಿ ಸಲ್ಲಿಸಬಹುದು. ಆಟೋ, ಟ್ಯಾಕ್ಸಿ ಚಾಲಕರಾಗಿರಬೇಕು. ಮಾರ್ಚ್ 1, 2020ರ ವರೆಗೆ ಚಾಲನೆ ಪರವಾನಿಗೆ ಪತ್ರ ಚಾಲ್ತಿಯಲ್ಲಿರಬೇಕು. ಈ ಎಲ್ಲ ದಾಖಲೆ ಸಮೇತ ಸೇವಾಸಿಂಧು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಆರ್ ಟಿಓ ಕಮಿಷನರ್ ಅವರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.