ಸಿಂದಗಿ: ನಿನ್ನೆ ಸಂಜೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಮೊದಲೇ ಕರೋನಾ ಲೌಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರಿಗೆ ವರುಣದೇವ ಮತ್ತಷ್ಟು ಬರೆ ಎಳೆದಿದ್ದಾನೆ.
ಗೋಲಗೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾಸಬಾಳ, ಡಂಬಳ, ಗೋಲಗೇರಿ ಹಳ್ಳಿಗಳಲ್ಲಿ ರೈತರು ಬೆಳೆದ ನಿಂಬೆ ಗಿಡ, ಮಾವಿನ ಗಿಡಗಳು ಧರೆಗುರುಳಿವೆ. ಹೀಗಾಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದ್ದು, ತೋಟಗಾರಿಕೆ ಇಲಾಖೆ ಹನಿಗೊಳಗಾದ ರೈತರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮಳೆಯಿಂದ ಹಾನಿಗೊಳಾಗದ ಹೊಲಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಬೂದಿಹಾಳ, ಗ್ರಾಮ ಸೇವಕ ಅಬ್ಬಾಸಲಿ ಅಂಗಡಿ, ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಸೇರಿ ಹಲವರು ಇಂದು ಮುಂಜಾನೆ ಭೇಟಿ ನೀಡಿ ನೀಡಿದ್ರು.