ಆರೋಪಿಗಳೆಲ್ಲ ಖುಲಾಸೆ: ಎಲ್ಲ 32 ಜನರು ನಿರ್ದೋಷಿಗಳು

449

ಪ್ರಜಾಸ್ತ್ರ ಸುದ್ದಿ

ನವದೆಹಲಿ: 1992ರ ಬಾಬರಿ ಮಸೀದಿ ಧ್ವಂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್.ಕೆ ಯಾದವ ಅವರು ತೀರ್ಪು ಓದಿದ್ರು. ಇದೊಂದು ಪೂರ್ವನಿಯೋಜಿತ ಸಂಚು ಆಗಿರ್ಲಿಲ್ಲ. ಹೀಗಾಗಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಲಖೌನ್ ದ ಸಿಬಿಐ ವಿಶೇಷ ನಾಯ್ಯಾಲಯದ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕ್ರಿಮಿನಲ್ ಸಂಚ ಅಲ್ಲ. ಇದಕ್ಕೆ ಯಾವುದೇ ಪ್ರಚೋದನೆ ಇರ್ಲಿಲ್ಲ. ಹೀಗಾಗಿ ಎಲ್ಲ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಮರುಳಿ ಮನೋಹರ ಜೋಶಿ, ವಿನಯ ಕಟಿಯಾರ್, ಸಾಕ್ಷಿ ಮಹಾರಾಜ್, ಸಾದ್ವಿ ರತಂಬಿರಾ ಸೇರಿ 26 ಜನರು ಕೋರ್ಟ್ ಗೆ ಹಾಜರಾಗಿದ್ರು. ಇದರಲ್ಲಿ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಎಲ್.ಕೆ ಅಡ್ವಾಣಿ, ಉಮಾ ಭಾರತಿ ಸೇರಿದಂತೆ 6 ಜನರು ಹಾಜರಾಗಿದ್ರು. ಕಲ್ಯಾಣ ಸಿಂಗ್ ಕೋವಿಡ್ 19ನಿಂದ ಹಾಜರಾಗಿರಲಿಲ್ಲ.

2 ಸಾವಿರ ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ಎಸ್.ಕೆ ಯಾದವ ಅವರು ಕೆಲ ಪ್ರಮುಖ ಅಂಶಗಳನ್ನು ಓದಿದ್ರು.




Leave a Reply

Your email address will not be published. Required fields are marked *

error: Content is protected !!