ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಕೋರ್ಟ್ ಸುತ್ತ ಪೊಲೀಸ್ ಸರ್ಪಗಾವಲು

338

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸ್ತಿದೆ. ಹೀಗಾಗಿ ಕೋರ್ಟ್ ಸುತ್ತಲು ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.

ಈ ಕೇಸಿನಲ್ಲಿ ಎಲ್.ಕೆ ಅಡ್ವಾನಿ, ಮುರುಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ ಸಿಂಗ್ ಸೇರಿದಂತೆ  ಅನೇಕ ಆರೋಪಿಗಳಿದ್ದು, ಈ ಎಲ್ಲ 32 ಜನ ಆರೋಪಿಗಳು ತೀರ್ಪು ಪ್ರಕಟವಾಗುವ ದಿನ ಕೋರ್ಟ್ ನಲ್ಲಿ ಹಾಜರಿರಬೇಕು ಎಂದು ಸೆಪ್ಟೆಂಬರ್ 16ರಂದು ಕೋರ್ಟ್ ನಿರ್ದೇಶನ ನೀಡಿತ್ತು.

ಇದೀಗ ಕಲ್ಯಾಣ ಸಿಂಗ್ ಹಾಗೂ ಉಮಾ ಭಾರತಿ ಕರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇವರು ಹಾಜರಾಗುವುದು ಡೌಟ್ ಎನ್ನಲಾಗ್ತಿದೆ. ಇನ್ನು 351 ಸಾಕ್ಷಿಗಳು, 600 ದಾಖಲೆಗಳನ್ನ ನೀಡಲಾಗಿದೆ. 48 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ 17 ಜನರು ಮೃತಪಟ್ಟಿದ್ದಾರೆ. ಸುದೀರ್ಘ 28 ವರ್ಷಗಳಿಂದ ನಡೆಯುತ್ತಿರುವ ಕೇಸಿಗೆ ಇಂದು ತೆರೆ ಬೀಳುತ್ತಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!