ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಕಾಂಗ್ರೆಸ್ ನೀಡಿರುವ ಪ್ರಣಾಳಿಕೆಯಲ್ಲಿ ಸಂವಿಧಾನದ ವಿರುದ್ಧ ನಡೆದುಕೊಳ್ಳುವ ಭಜರಂಗದಳ ಹಾಗೂ ಪಿಎಫ್ಐ ಸೇರಿ ಯಾವುದೇ ಸಂಘಟನೆಗಳು ಇರಲಿ ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ನಿಷೇಧ ಮಾಡಲಾಗುತ್ತೆ ಎಂದು ತಿಳಿಸಿದೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಕೋಮುವಾದ ಬೆಳಸಿ ಜಾತಿಯ ವಿಷ ಬೀಜ ಬಿತ್ತಿ ಸಂಘರ್ಷ ಸೃಷ್ಟಿಸುವ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅದನ್ನು ಪ್ರಣಾಳಿಕೆಯನ್ನು ಸೇರಿಸಲಾಗಿದೆ ಎಂದರು.
ಇನ್ನು ಮೋದಿ ಮಹಾ ನಾಟಕಕಾರ, ಸುಳ್ಳುಗಾರ. ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಲೇ ಎಲ್ಲ ಕಡೆ ಲಂಚತನ ನಡೆದಿದೆ. ಶೇಕಡ 40ರಷ್ಟು ಕಮಿಷನ್ ಸರ್ಕಾರ ಇದು. ಬಿಜೆಪಿಯ ಸಾಲು ಸಾಲು ಸಚಿವರು, ಶಾಸಕರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಇಂತಾ ಸರ್ಕಾರ ಬೇಕಾ ಎಂದು ವಾಗ್ದಾಳಿ ನಡೆಸಿದರು.