ಪ್ರಜಾಸ್ತ್ರ ಸುದ್ದಿ
ಸಿಂದಗಿ: ಬಂದಾಳ ಗ್ರಾಮ ಪಂಚಾಯಿತಿಯ ಚುನಾವಣೆ ಇತ್ತೀಚೆಗೆ ನಡೆದು ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಂಡಿದ್ದವು. ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ನಡೆದಿದೆ. ಓತಿಹಾಳ ಗ್ರಾಮದ ಸದಸ್ಯೆ ಸುವರ್ಣ ಶಂಕ್ರಪ್ಪ ಮಕನಾಪುರ ಅಧ್ಯಕ್ಷರಾಗಿ, ಬಂದಾಳ ಗ್ರಾಮದ ಸದಸ್ಯ ಜಟ್ಟಪ್ಪ ಸಿರಿಮಂತ ಉಕ್ಕಲಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸುವರ್ಣ ಶಂಕ್ರಪ್ಪ ಮಕನಾಪುರ ಹಾಗೂ ಕಲಾವತಿ ಪದ್ಮಣ್ಣ ದೇವೂರ ನಡುವೆ ಫೈಟ್ ನಡೆದಿತ್ತು. ಇದರಲ್ಲಿ ಸುವರ್ಣ 23 ಮತಗಳು ಪಡೆದು ಗೆಲುವು ಸಾಧಿಸಿದರು. ಕಲಾವತಿ ಕೇವಲ 3 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಇನ್ನು ಉಪಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಜಟ್ಟಪ್ಪ ಸಿರಮಂತ ಉಕ್ಕಲಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯ್ತಿ ಇಒ ಹೊಂಗಯ್ಯ.ಕೆ ಕಾರ್ಯನಿರ್ವಹಿಸಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಬೂದಿಹಾಳ ಪಿ.ಎಚ್ ಗ್ರಾಮದ ಬಿಜೆಪಿ ಅಧ್ಯಕ್ಷ ಜಗದೀಶ್.ಕೆ ಬಿರಾದಾರ ಸೇರಿದಂತೆ ಸರ್ವಸದಸ್ಯರು ಶುಭ ಕೋರಿದರು.