ಮಕ್ಕಳು, ರೋಗಿಗಳಿಗೆ ಹಾಲು ವಿತರಿಸಿ ಬಸವ ಪಂಚಮಿ ಆಚರಣೆ

466

ಬೆಳಗಾವಿ: ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿಯನ್ನ ಆಚರಿಸಲಾಯ್ತು. ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ಬಸವ ಪಂಚಮಿ ಆಚರಿಸಲಾಯ್ತು.

ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ತಮ್ಮ ಎಂದಿನ ಕಾರ್ಯವನ್ನ ಮಾನವ ಬಂಧುತ್ವ ವೇದಿಕೆ ಮುಂದುವರೆಸಿಕೊಂಡು ಬರ್ತಿದೆ. ಈ ವೇಳೆ ವೇದಿಕೆಯ ಕಾರ್ಯಕರ್ತರಾದ ಯಶೋಧರ, ಮಲ್ಲಿಕಾರ್ಜುನ, ಕಲ್ಲಪ್ಪ, ಮಾಳಪ್ಪ, ದಶರಥ, ಸಂತೋಷ, ದುರ್ಗಪ್ಪ, ರಾಜು, ರವಿ ಸೇರಿದಂತೆ ಅನೇಕರು ಭಾಗವಹಿಸಿದ್ರು.

ಅಕ್ಕ ಅನ್ನಪೂರ್ಣತಾಯಿ ಅವರಿಂದ ರೋಗಿಗಳಿಗೆ ಹಾಲು ವಿತರಣೆ

ಇನ್ನು ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವ ಸೈನ್ಯದ ನೇತೃತ್ವದಲ್ಲಿ ರೋಗಿಗಳಿಗೆ, ಮಕ್ಕಳಿಗೆ ಹಾಲು ಕುಡಿಸುವುದರ ಮುಖಾಂತರ ಬಸವ ಪಂಚಮಿಯನ್ನ ವಿಭಿನ್ನವಾಗಿ ಆಚರಿಸಲಾಯ್ತು. ಬೀದರನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಅವರಿಂದ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸಲಾಯ್ತು.




Leave a Reply

Your email address will not be published. Required fields are marked *

error: Content is protected !!